ನನ್ನ ಅಂಬೋಣ

ನಾವು, ನೀವು
ನಮ್ಮ, ನಮ್ಮ ಹೆಂಡಿರ ಪ್ರೀತಿ ಮಾಡುವುದು ನಿಜವೇನಾ?
ನನಗೇನೋ ಪೂರ್ಣ ಅನುಮಾನಾ!
ಜಾಣ ರೈತನೊಬ್ಬ ತನ್ನ ದನಗಳ ಜೋಪಾನ ಮಾಡಿದಂತೆ
ಎಂಬುದೇ ನನ್ನ ಅಂಬೋಣ.

ಅವ, ಕೋಡೆರೆದು, ಕಳಸ ಇಟ್ಟು,
ಹೊತ್ತಿಗೆ ಹುಲ್ಲು, ನೀರು ನೋಡಿ,
ಮೈತಿಕ್ಕಿ ತೀಡಿ, ಸ್ವಚ್ಛ ಮಾಡಿ
ಲಕ್ಷಣವಾಗಿ ಇಟ್ಟು ಕೊಳ್ಳುವುದು ಯಾತಕ್ಕಾಗಿ
ಒಳ್ಳೆ ಬೆಲೆ ಬರುವುದೇ ತಡ ಮಾರೋ ಉದ್ದೇಶಕ್ಕಾಗಿ,

ಅವುಗಳಲ್ಲಿ ಪ್ರಾಣ ಇಟ್ಕೊಂಡು
ಎತ್ತಿಲ್ಲದವನಿಗೆ ಎದೆಯಿಲ್ಲ ಅಂದು
ಜಡ್ಡು ಜಾಡು ಬಂದು ಕೇಡಾಗದಂತೆ, ಕಾಡಾಗದಂತೆ
ಮೈಯೆಲ್ಲಾ ಕಣ್ಣಾಗಿ ನೋಡಿಕೊಳ್ಳುವನು.

ಏನೇ ಮಾಡುತ್ತಿದ್ದರು, ಎಲ್ಲಿಗೆ ಹೋದರೂ
ಮನಸೆಂಬ ಮನಸೆಲ್ಲಾ ಇತ್ತ ಕಡೆಗೇನೆ ಇಟ್ಟು ನಡೆಯುವನು
ಬಿಟ್ಟರೆ ಅವನಿಗೆ ಬೆಳೆಸಿರಿಯಲ್ಲಿ?
ಬಾಳೇ ಕೆಟ್ಟೋಗಿ ಆಟವೇ ಕಟ್ಟಾಗಿ ಹೋಗುವುದಲ್ಲ ಅಷ್ಟಕ್ಕಾಗಿ!
ಮತ್ತೇನು ಅವನ
ಹಿರಿಯ ಭೂತ ದಯೆಯ ಪ್ರೇರಣೆಯಿಂದ ಅಂತ ತಿಳಕೊಂಡಿರೇನು?

ಮುಂದೆ ಕೇಳಿ –
ಕೆಲ್ಸ ಕಾರ್ಯ ಬಿದ್ದಾಗ ಅವನು ಮುಖ ಮೋರೆ ನೋಡಲ್ಲ
ಎಂಥಾ ಹಿಂಸೆಗೂ ಹೇಸೋನಲ್ಲ
ಕೆಲ್ಸ ಆಗೋತನಕ ಮನುಷ್ಯನಾಗಿರಲ್ಲ.

ಅವನಿಗೆ-
ಸುಸ್ತು, ಸಾಕೆನ್ನದಂತ
ಸಾದೆತ್ತುವಾದರೆ ಅಚ್ಚು ಮೆಚ್ಚು.
ನಿಧಾನಕ್ಕೆ ಬಿದ್ದ, ಮೊಂಡಾಟ ಮಾಡೋ, ಹಾಯಲು ಬರುವ
ಪಟಿಂಗನಾದರೆ

ಸಾಯುತ್ತೋ ಬದುಕುತ್ತೋ ಎನ್ನದೆ ಚಚ್ಚಿ
ಬಗ್ಗಿಸಿಕೊಳ್ಳಲು ನೋಡುವನು.
ಬಗ್ಗದೆ ಹೋದರೆ
ಬಂದದ್ದು ಬರಲೆಂದು
ಮುಗಿಸಿ | ನಡಿ ಎನ್ನುವನು.

ಈಗ ಹೇಳಿ
ಇದೊಂದು ಪ್ರೇಮಾನಾ?
ಇವನೊಬ್ಬ ಪ್ರೇಮಿನಾ?
ನಮ್ದು ನಿಮ್ದು ಇದರಂತೆ ಅಲ್ಲವೇನಾ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವಿರ ಭಾಷೆ ಸಾವಿರ ವೇಷ
Next post ಗಣನೆ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys